X
    ವಿಭಾಗಗಳು: Uncategorized

ಕೃಷ್ಣಂ ವಂದೇ ಜಗದ್ಗುರುಂ

ಜಗವೆನ್ನ ಒಳಗಿರಲು ಭಗವಂತ ನಗುತಿರಲು
ನನ್ನೊಳಗೆ ನೂರಾರು ರುದ್ರಲೀಲೆ
ಗಿರಿಧರನೆ ನೀ ನಿಜದಿ ಕಂಡ ಲೀಲೆಗಳೆಲ್ಲ
ಎನ್ನೊಳಗೆ ಸಂಭವಿಸಿ ನಗೆಯ ಮಾಲೆ…

ನೀನೆನಗೆ ಶ್ರೀಕೃಷ್ಣ ನಾ ನಿನಗೆ ಶ್ರೀಕೃಷ್ಣ
ನೀನುನಾನೆಂಬ ಅಂತರವೂ ಕರಗಿ
ನಾನಿಲ್ಲ ನೀನಿಲ್ಲ ಜಗವೆಲ್ಲವೂ ಒಂದು
ಬಿಂದುವಲಿ ಸಂಧಿಸಿರೆ ಸೋತೆ ಬಾಗಿ

ಮೇರುವಿಂಧ್ಯಾದ್ರಿಯಲಿ ಸೌಂದರ್ಯಕಾಶಿಯಲಿ
ತಪಿಸುತಿಹ ಪರಮಶಿವ ಶ್ರೀಉಮೇಶ
ಪರಮಶಿವನೆದೆಯಲ್ಲಿ ಕುಳಿತು ಜಗ ನೋಡುತಿರೆ
ನಾಕನೂಪುರ ಕೂಡ ಕಾಲಕೆಳಗೆ

ಕೃಷ್ಣನಂತಿಹ ವಿಷ್ಣು ಪರಮಶಿವ ಈಶನೂ
ಸಂಧಿಸಿದ ಪರಿಯಲ್ಲಿ ಈಗ ನನ್ನಲ್ಲಿ-
ಎದೆಯಲ್ಲಿ ಮುದ’ಮೋಹಿನಿ’ಯು ಪ್ರೀತಿ’ಶಿವ’ನನ್ನು
ವರಿಸೆ -ಕಣ್ಣೀರ’ಮಣಿ, ಕಂಠ’ತುಂಬಿ

ಈ ಪೋಸ್ಟ್ ಅನ್ನು ಶೇರ್ ಮಾಡಲು:
ಕವನತನಯ:

ಈ websiteನಲ್ಲಿ cookies ಬಳಸಲಾಗುತ್ತದೆ.