ಕೆಂಡಸಂಪಿಗೆ

ಮೀನಲೋಚನೆ!, ಕುಸುಮಕಕಂಗಳ
ಮಿಟುಕಿ ಕಾಡಲುಬೇಡವೇ
ಕೆಂಪುಗೆನ್ನೆಯ ಮುದ್ದುಗಲ್ಲವ
ತೋರಿ ಕೆರಳಿಸಬೇಡವೇ…

ತುಟಿಯನರಳಿಸಿ ದಂತಪಂಕ್ತಿಯ
ಚಂದ ತೋರಲುಬೇಡವೇ
ಕಿವಿಯ ಕೆಳಗಿನ ನವಿರುಗೂದಲ
ಸರಿಸಿ ಸೆಳೆಯಲುಬೇಡವೇ…

ಮೃದುಲ ಪಾದದ ಮುದ್ದು ನಾದವ
ನನಗೆ ಕೇಳಿಸಬೇಡವೇ
ಬಳೆಯ ಝಣಝಣ ನಾದದೌತಣ
ಉಣಿಸಿ ತಣಿಸಲುಬೇಡವೇ

ಕೈಗೆ ಸಿಗುತಲಿ ನುಣುಚಿ ಓಡುತ
ಆಟವಾಡಲುಬೇಡವೇ
ಪ್ರೀತಿಪುಷ್ಪದ ಘಮವ ತೋರಿಸಿ
ಹೂವನಡಗಿಸಬೇಡವೇ…

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *