ಹಂಸಯಾನ : ಕಾದಂಬರಿಯೊಡನೆ ನನ್ನ ಯಾನ…

ಕಾದಂಬರಿಯ ವಸ್ತುವಿನ ಬಗ್ಗೆ ಹೇಳುವುದಕ್ಕೆ ಮೊದಲು ನಾನು ಪುಸ್ತಕವನ್ನ ಕೊಂಡದ್ದರ ಬಗ್ಗೆ ಹೇಳಲೇಬೇಕು.. ಈ ಸಲದ ಬೇಂದ್ರೆ ಪ್ರಶಸ್ತಿಗೆ ಆಯ್ಕೆಯಾದ ತೇಜಸ್ವಿನಿ ಹೆಗಡೆ ಅವರ ‘ಹಂಸಯಾನ’ದ ಬಗ್ಗೆ facebookನಲ್ಲಿ ನೋಡಿ ನಂತರ ಅದನ್ನು ಕನ್ನಡಲೋಕದ ಮೂಲಕ ಆರ್ಡರ್ ಮಾಡಿದೆ. ಅದು ನನಗೆ ಸಮೀಪದ ಕೊರಿಯರ್ ಆಫೀಸ್ ಗೆ ಬಂದರೂ ಏಜೆಂಟ್ ಅದನ್ನು ಡೆಲಿವರ್ ಮಾಡಲೇ ಇಲ್ಲ. ನನಗೆ ಕಾಲ್ ಮಾಡಿ ಅಡ್ರೆಸ್ ವಿಚಾರಿಸಿದ್ದ ಪುಣ್ಯಾತ್ಮ ಮೂರ್ನಾಲ್ಕು ದಿನ ಕಳೆದರೂ ಬರಲೇ ಇಲ್ಲ. ಕೇಳಿದರೆ ಬ್ಯುಸಿ ಇದೀನಿ, ಕೆಲಸ ಇದೆ ಅದು ಇದು ಕಾರಣ ಬೇರೆ! ಕನ್ನಡಲೋಕ ವೆಬ್ ಸೈಟ್ ಗೆ ಲಾಗಿನ್ ಆಗಿ ಟ್ರಾಕಿಂಗ್ ಐಡಿ ನೋಡೋಣ ಅಂದರೆ ಪಾಸ್ ವರ್ಡ್ ಮರ್ತೋಗಿದೆ! ಆಮೇಲೆ ಕನ್ನಡಲೋಕ ದ ಅಡ್ಮಿನ್ ಅವರಿಗೆ ಕಾಲ್ ಮಾಡಿದೆ. ತಕ್ಷಣ ರಿಪ್ಲೈ ಮಾಡಿದ ಅವರು ನನಗಾಗಿ ಪಾಸ್ ವರ್ಡ್ ರಿಸೆಟ್ ಮಾಡಿ ಕೊಟ್ಟದ್ದಲ್ಲದೇ ಟ್ರಾಕಿಂಗ್ ಮಾಹಿತಿ ಕೂಡಾ ಕೊಟ್ಟರು. ಆಮೇಲೆ ಪುಸ್ತಕ ಕೈಗೆ ಸಿಗುವವರೆಗೂ ಖುದ್ದಾಗಿ ವಿಚಾರಿಸಿದರು. ನನಗಂತೂ ಬಹಳ ಖುಷಿಯಾಯಿತು. ಈ ರೀತಿಯಲ್ಲಿ ಕಾಳಜಿಯಿಂದ ಸೇವೆ ಒದಗಿಸುವವರು ತೀರಾ ವಿರಳ…

 

ಕಾದಂಬರಿ ಶುರುವಿನಲ್ಲೇ ಕುತೂಹಲ ಹುಟ್ಟಿಸುತ್ತೆ. ನಾನು ಅದರ ಕಥೆ ಹೇಳಿ ಖಂಡಿತಾ ನಿಮ್ಮ ಓದಿನ ಅನುಭವ ಹಾಳು ಮಾಡಲ್ಲ. ಆದರೆ ಉತ್ಕೃಷ್ಟ ಓದಿನ ಸವಿಯನ್ನು ಅದು ಕೊಡುತ್ತದೆ ಅಂತ ಹೇಳಬಲ್ಲೆ. ಕಥಾನಾಯಕಿಯ ವ್ಯಕ್ತಿತ್ವ ತೀರಾ ಆಪ್ತ, ಸ್ವಂತವೆನಿಸುತ್ತೆ. ಆಕೆ ತೀರಾ ಸಾಂಪ್ರದಾಯಿಕ ಮನೋಭಾವದವಳು ಅಲ್ಲದಿದ್ದರೂ ಅಧ್ಯಾತ್ಮವೇ ಅವಳ ಬಲ ಅಂತ ಅನಿಸೋದಿದೆ.  ಸಸ್ಪೆನ್ಸ್, ಪ್ರೀತಿ, ಸಾಹಸ ಅಧ್ಯಾತ್ಮ ಎಲ್ಲಾ ಸರಿಯಾಗಿ ಮಿಳಿತಗೊಂಡಿರೋ ಇದರಲ್ಲಿ ಯಾವುದೂ ಅತಿಯಾಯಿತು ಎನಿಸೋಲ್ಲ.

ಕಥಾನಾಯಕಿ ಮಹತಿ ಎಷ್ಟು ಭಾವುಕಳೋ ಅಷ್ಟೇ ಗಟ್ಟಿ ಮನಸ್ಸಿನ ಹುಡುಗಿ. ಬಾಲ್ಯದ ಜೀವನ ಘಟನೆಗಳು ವ್ಯಕ್ತಿಯನ್ನ ಹೇಗೆ ಬದಲಿಸುತ್ತೇ ಅನ್ನೋದು ಅವಳ ಪಾತ್ರ ನೋಡಿದರೆ ತಿಳಿಯುತ್ತೆ. ಒಮ್ಮೆ ಆಕೆ ಸ್ವಲ್ಪ ಅತಿಮಾನುಷ ಅನ್ನಿಸುವಂಥ ವಿಶೇಷ ವ್ಯಕ್ತಿಯೊಬ್ಬರನ್ನ ಭೇಟಿ ಆಗುವ ಸನ್ನಿವೇಶ ಬರುತ್ತೆ. ಆ ಸನ್ನಿವೇಶ ಎಷ್ಟು ಸರಳ, ನೈಜತೆಗೆ ಹತ್ತಿರವಾಗಿದೆ ಎಂದರೆ ನನಗೆ ಥಟ್ಟನೆ ನೆನಪಾಗಿದ್ದು ‘ಮಲೆಗಳಲ್ಲಿ ಮದುಮಗಳು’ದಲ್ಲಿ ಮುಕುಂದ ಗಡ್ಡದಯ್ಯನನ್ನ ಭೇಟಿ ಆದ ದೃಶ್ಯ! ಎರಡೂ ಕೂಡ ಸಮವಾಗಿ ವಿಶೇಷವಾದ ಘಟನೆಯೊಂದನ್ನ ಆಕ್ಷೇಪಣೆಗೆ ಅವಕಾಶವಿಲ್ಲದಂತೆ ಬೆಸೆಯುತ್ತವೆ. ಇಂತಹ ಕೌಶಲ್ಯ ಕಾದಂಬರಿಯುದ್ದಕ್ಕೂ ಕಾಣುತ್ತದೆ…

ಕಥೆಯಲ್ಲಿ ಓಡಾಡುತ್ತಾ ಸಾಗುವ ಘಟನಾ ಸರಪಳಿ ನಮ್ಮನ್ನೂ ಓಡಿ(ದಿ)ಸಿಕೊಂಡೇ ಕರೆದೊಯ್ಯುತ್ತದೆ. ಕೊನೆಯಲ್ಲಿ ಕ್ಲೈಮ್ಯಾಕ್ಸ್ ಮುಗಿವ ವೇಳೆಗೆ ನಾಯಕಿಯ ಜೊತೆಗೆ ನಮ್ಮ ಮನಸ್ಸೂ ನಿರಾಳ….

ಖಂಡಿತಾ ಕೊಂಡು ಒಡಬೇಕಾದ ಪುಸ್ತಕ. ಕೊಳ್ಳಲು ಕನ್ನಡಲೋಕ.ಇನ್ ಗೆ ಲಾಗ್ ಆನ್ ಆಗಿ ..

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *