ಕೆಂಡಸಂಪಿಗೆ

ಎನಿತು ಸುಖವೆ! ಬಿದ್ದ ಮೇಲೆ
ನಿನ್ನ ತೋಳ ತೆಕ್ಕೆಗೆ!
ಎಂತು ಸಖಿಯೆ, ತಂದೆ ಬಲವ
ನನ್ನ ಬಾಳ ರೆಕ್ಕೆಗೆ!

ತುಡಿವ ತುಟಿಯ ತವಕ ತಡೆವೆ
ಸಿಹಿಯ ಮುತ್ತು ತಿನ್ನಿಸಿ
ಮಿಡಿವ ಮನದ ಮೋಹ ಮೆರೆವೆ
ರಮಿಸು, ತಪ್ಪು ಮನ್ನಿಸಿ

ಬರಿಯ ಕಾಮವಲ್ಲ ಕೇಳು,
ಪ್ರೀತಿ ಬಾಳ ತತ್ತ್ವ
ನನ್ನ ನಿನ್ನ ಸಾಂಗತ್ಯದೆ
ಇರುವುದೆಲ್ಲ ಸತ್ವ….

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *