ಕೊಂದುಬಿಡು ಗಮ್ಯವನು ಸೇರೊ ಮೊದಲೇ…

ಎಂದಿಗೂ ಫಲನೀಡದಿರುವ ಹಾದಿಯೊಳೆನ್ನ

ಕೊಂದುಬಿಡು ಗಮ್ಯವನು ಸೇರೊ ಮೊದಲೇ

ಯಾರಿಗೂ ಬೇಕಿರದ ಗಂಗೆ ತರುವಾ ಮುನ್ನ

ಸಾರಿಬಿಡು ನನ್ನ ಹೆಣ ಸತ್ತಿತೆಂದು

 

ತಂಪು ಗಿರಿವಿಪಿನದಲಿ ಹುಟ್ಟಿಹರಿದಾ ಒರತೆ

ಮರುಭೂಮಿಯಲ್ಲೇಕೆ ಬದುಕಿರುವುದು?

ಯಾರು ಕುಡಿಯದ ಕೆರೆಯ ಸೇರಿ ಕರಗುವ ಮುನ್ನ

ಇಂಗಿಹೋಗಲಿ ಬೆಂದ ಮರಳ ಮೇಲೆ…

 

ವಿಪಿನವಾಗದ ಬದುಕು ರಣಭೂಮಿಯಾದರೂ

ಸರಿಯೆ, ಮಸಣದ ನೀರವತೆಯು ಬೇಡ

ಬದುಕದೆಯೆ ಬದುಕಿಸದೆ ಜೀವತುಂಬದೆ ಕೊರಗಿ

ಅಸುವಳಿವ ಮುನ್ನವೇ ಕೊಂದುಬಿಡೆಯಾ…

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *