ಭಾರತಿ

ಬಹುವಿಶಾಲಳೀ ಭಾರತಿ
‘ಸರ್ವದಾ’ತೆ ಸುಸ್ಮಿತೆ
ಧರ್ಮ ಧೈರ್ಯ ಸಿರಿಸಂಸ್ಕೃತಿ
ಈ ಮಾತೆಯ ಅಸ್ಮಿತೆ! ।।

ಹರಿವ ಸುರಿವ ಹನಿನೀರೂ
ಸಿಹಿನೀರಿನ ಗಂಗೆ
ಮಣ್ಣಮಡಿಲಲೊರಗುವವಗೆ
ತಂಪನೀವ ಹೊಂಗೆ
ರಾಮ ಬುದ್ಧ ಯುವವಿವೇಕ
-ರುಸಿರಿದೆ ಕಣಕಣದಿ
ಒಮ್ಮೆ ನೆನೆದು ಧನ್ಯನೆನ್ನು
ಭಕ್ತಿದುಂಬಿ ಮನದಿ

ಇಲ್ಲದಿರುವುದನ್ನು ನೆನೆದು
ಮರುಗಬೇಡ ನೀ ವೃಥಾ
ಇರುವ ಸಿರಿಯ ಕಂಡು ಸುಖಿಸು
ನುಡಿವೆಯೇಕೆ ಅನೃತ
ಭಾರತೀಯನೆಂಬ ಪದವಿ
-ಗಿಂತ ಸಿರಿಯು ಬೇಕೇ?
ಒಮ್ಮೆ ಅರಿತು ಹೆಮ್ಮೆ ಪಡಲು
ಬೇರೆ ಸುಖವು ಬೇಕೇ?!

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *