ಶಾಂತಲಾ…

ಲವಲವಿಕೆ ಮೈವೆತ್ತಿ ಮಮತೆ ತಾ ಮರುಹುಟ್ಟಿ
ತಳೆದ ತಾಯಿಯ ರೂಪ ಅವಳು ತಾನೇ
ಕಣ್ಣ ತುಂಬಾ ಹೊಳಪು, ಮಂದಹಾಸವು ನಿರತ
ಅವಳ ವಾತ್ಸಲ್ಯಕ್ಕೆ ಸೋತೆ ನಾನೇ

ಬರಿದೆದೆಯ ಜೋಳಿಗೆಯ ಸಂಪದದಿ ತುಂಬುವೊಲು
ವಾತ್ಸಲ್ಯ ಪೀಯೂಷ ಸುರಿಸಿದವಳು!
ಎನಿತು ಜನ್ಮದ ಋಣವೊ, ಕಾರುಣ್ಯಮೂರ್ತಿ ತಾ
ಅಮ್ಮನಾಗೆನ್ನ ಮನ ನಲಿಸಿದವಳು

ಚಂದ್ರಶಾಲೆಯಲಿಂದು ಚಂದಿರನ ಬೆಳಕಿಲ್ಲ
ಉರಿದಿದ್ದ ಹಣತೆಯೂ ಮಾಯವಾಯ್ತು
ತನು ಬಿರಿಯುವೊಲು ನೋವು, ಅವಳಿಲ್ಲವಂತಲ್ಲ
ಆಟ ನಿಲ್ಲಿಸು ಕೃಷ್ಣ, ಇದು ನಾ ಸೋತ ಹೊತ್ತು..

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *